ನಿನ್ನ ಒಲುಮೆಯಿಂದ

ವಿಜಯದಾಸರ ಕೃತಿ – ನಿನ್ನ ಒಲುಮೆಯಿಂದ

Click here:

https://youtu.be/kZIiPoekQkg

 

 

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ ಮಹರಾಯ ।
ಎನ್ನ ಪುಣ್ಯಗಳಿಂದ ಈ ಪರಿಯುಂಟೆನೊ                    ನಿನ್ನದೇ ಸಕಲ ಸಂಪತ್ತು ।।

ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ            ಪೂರ್ಣವಿಚಿತ್ರ ಸುವಾಸನ ।
ವರ್ಣ ವರ್ಣದಿಂದ ಬಾಹೋದೇನೊ ಸಂ                    ಪೂರ್ಣ ಗುಣಾರ್ಣವ ದೇವಾ ।।

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ
ತಬ್ಬಿಬ್ಬುಗೊಂಡೆನೊ ಹಿಂದೆ।
ನಿಬ್ಬರದಲಿ ಸರ್ವರ ಕೂಡುಂಬೊ                      ಹಬ್ಬದೂಟವ ಉಣ್ಣಿಸುವೆಯೋ ।।

ಸಂಜಿ ತನಕ ಇದ್ದು ಸಣ್ಣ ಸೌಟಿನ ತುಂಬ                        ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ              ಭುಂಜಿಸುವುದು ಮತ್ತೇನೋ ।।

ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು
ಮ್ಮನೆ ಚಾಲವರಿದು ಬಳಲಿದೆನೋ ।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ                          ತಾನೆ ಪ್ರಾಪ್ತಿ ನೊಡೋ ಜೀಯಾ ।।

ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ                    ಮೆದ್ದೆನೆಂದರೆ ಈಯಗಾವ।                                            ಈ ಧರೆಯೊಳಗೆ ಸತ್ಪಾತ್ರರ ಕೂಡುಂಬೊ                      ಪದ್ಧತಿ ನೋಡೋ ಪುಣ್ಯಾತ್ಮ ।।

ನೀಚೊಚ್ಛ ತಿಳಿಯದೆ ಸರ್ವರ ಚರಣಕ್ಕೆ                      ಚಾಚಿದೆ ನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ                      ವಾಚಕ್ಕೆ ನಿಲಿಕದೋ ಹರಿಯೇ ।।

ವೈದಿಕ ಪದವೀವಗೀಬಗೆ ಲೌಕಿಕ                          ಐದಿಸುವದು ಬಲು ಖ್ಯಾತೆ ।
ಮೈದುನಗೊಲಿದ ಶ್ರೀ ವಿಜಯವಿಟ್ಠಲ ನಿನ್ನ
ಪಾದಸಾಕ್ಷಿಯ ಅನುಭವವೋ ।।

ನಿನ್ನ ಒಲುಮೆಯಿಂದ ..

Sumadhwa Seva © 2022